ಎಲ್ಲ ಕನ್ನಡಾಭಿಮಾನಿಗಳಿಗೂ ನಮಸ್ಕಾರ..
ನನ್ನ ಹೆಸರು ರಾಮಚಂದ್ರ ಸಾಗರ್...ನಾನು ಓದಿದ್ದು ಬಿ.ಕಾಂ ಪದವಿ..ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆ ಸಾಗರ ನನ್ನೂರು..ನನ್ನ ಮನದಲ್ಲಿ ಸಾಗರದಷ್ಟೇ ಕನಸಿದೆ, ಸಾಹಿತ್ಯದ ಒಲವಿದೆ, ಬರಣಿಗೆಯ ಹುಚ್ಚು ಕುಣಿತವಿದೆ, ಶಾಂತ ಸಾಗರದಲ್ಲಿ ಬೀಸುವ ದಣಿವಾರಿಸುವ ಮೆಲುಗಾಳಿಯ ಅಲೆಯಂತೆ ನನ್ನ ಮನದಲ್ಲಿ ಸಾಹಿತ್ಯದ ಸಾಗರದಲ್ಲಿ ಎದ್ದ ಅಲೆಯ ಸುಳಿಗಾಳಿಗೆ ಮನ ಸೋತಿದೆ, ಶರಣಾಗಿದೆ, ಮನದ ಹುಚ್ಚು ಆಸೆಗೆ ಹೊಳೆದಿದ್ದೆಲ್ಲಾ ಪದಗಳಾಗಿ ಅಚ್ಚಾಗಿಸಿದೆ..ನನಗೆ ಕವಿತೆಯೆಂದರೆ ಜೀವ..ನಾನು ಉಸಿರಾಡುವುದು ಕವಿತೆಯೆಂದರೂ ತಪ್ಪಿಲ್ಲ.. ಕವಿತೆಯೇ ನನಗೆ ಪ್ರಾಣ..
ಜೊತೆಗೆ ಮನದಲ್ಲಿ ಎದ್ದ ತಲ್ಲಣಗಳಿಗೆ, ಸಮಾಜದಲ್ಲಿ ಸಿಕ್ಕ ಅನುಭವದ ಬುತ್ತಿಯಿಂದ ಲೇಖನ, ಕಥೆ, ಕಾದಂಬರಿಯ ರೂಪವನ್ನು ನೀಡಿದ್ದೇನೆ..
ಏನೋ ಒಟ್ಟಾರೆ ಮನಕ್ಕೆ ಸಾಕ್ಷಿಯಾಗಿ ಸತ್ಯವೆನ್ನುವುದನ್ನು ಮುಲಾಜಿಲ್ಲದೇ ಗದ್ಯದಲ್ಲಿ ಬರೆದಿದ್ದೇನೆ....ಕಾಲೇಜು ದಿನಗಳಿಂದಲೇ..ಏನೋ ಸಾಧಿಸಲೇಬೇಕೆಂದು ಅಲ್ಲದಿದ್ದರೂ ಮನದ ಮನೆಯಲ್ಲಿ ಅರಳಿ ಕುಳಿತ ಕನಸುಗಳಿಗೆ ಉತ್ತರಿಸಬೇಕೆನ್ನುವ ಛಲದಿಂದ ಬರೆಯುತ್ತಿರುವೆ..
ಐದು ಕವನ ಸಂಕಲಗಳನ್ನು ಹೊರತಂದಿರುವೆ, ರಾಜ್ಯ ಪ್ರಮುಖ ಕವಿಘೋಷ್ಠಿಗಳಲ್ಲಿ ಭಾಗವಹಿಸಿರುವೆ, ಅದರಲ್ಲಿ ಮುಖ್ಯವಾಗಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನವೂ ಒಂದೂ..
ಸಾಹಿತ್ಯವೆನ್ನುವ ಶಾಂತ ಸಾಗರದ ಒಂದು ಹನಿ ನಾನು..
ಮನಕೆ ಪ್ರೇರಣೆಯ ಬೆಳುದಿಂಗಳು ಬೆಳಕು ಸೂಸುವ ಓದುಗರು ನೀವು..
ನಿಮ್ಮ ಸಹೋದರ ಬಂಧು..
ರಾಮಚಂದ್ರ ಸಾಗರ್
ಸಾಹಿತಿ, ಅಣಲೇಕೊಪ್ಪ, ಸಾಗರ, ಶಿವಮೊಗ್ಗ ಜಿಲ್ಲೆ 577401, email: [email protected]
web: ramachandrasagar.blogspot.in
Report Issue
Report Issue
Report Issue